ಏನ ಮಾಡಿ ಒಗದ್ಯೋ, ಯಾತರಿಂದ ಮಾಡಿ ಒಗದ್ಯೋ, ತಂದೆ!
ಇವನು ಎಷ್ಟು ಹಂಡ ಬಂಡ, ಎಷ್ಟು ಅಡಸಲ ಬಡಸಲ,
ಬೆಳದಂಗೆಲ್ಲಾ ಬಿಚಿಗೆಂಡು ಹೊಂಟಂಗೆ ಯಾವ್ದೋ ಕಗ್ಗಂಟು,
ಎಲ್ಲಾ ಗೊತ್ತಾಗಿತ್ತೇನೊ ಅನುವಂಗೆ
ಒಂದೊಂದೇ ಕಂಡಿ, ಒಂದೊಂದೇ ಗುಳ್ಳೆ, ಒಂದೊಂದೇ ಹುಳುಕು,
ಈಟೀಟಗಲ ಬೆಳೆದು ಕಣ್ಬಿಡುತಾವೆ
ಬೆಳ್ಳಗಿದ್ದ ಬೆಳದಿಂಗಳ ಮೈಮನಸೆಲ್ಲಾ
ಕರೀ ನೆಳ್ಳು ತ್ಯಾಪಿ ಹಚಿಗೆಂಡು ಮುಚಿಗೆಂಡು
ಎಂಥೆಂಥದೋ ಮಾಡರ್ನ್ ಆರ್ಟಾಗಿ ಅರ್ಥಹೀನಾಗ್ತಾವೆ
ಯಾವ್ಯಾವೊ ಹಗ್ಗಾ ಅತ್ತಾಗಿತ್ತಾಗ ಜಗ್ಗಿ
ಈ ಗೊಂಬೀನ ಅಷ್ಟಾವಕ್ರ ಮಾಡ್ತಾವೆ
ಸುತ್ತು ನೂರೆಂಟು ಸೆಳೆದಾರಗಳ ಮಧ್ಯದ ಗೂಟದಂಗೆ
ಕೆಸರಾಗಿನ ಮಣ್ಣಿನಗೊಂಬಿ ಅತ್ತಾಗೆ ಇತ್ತಾಗೆ ಅಂತ
ಪರಿಣಾಮದ ಕಲೆಗಳನ್ನ ಹೊಸದಾಗಿ ಜೋಡಿಸಿಕೊಂತಾತೆ
ಉಬ್ತದೆ, ಕುಗ್ತದೆ, ಹಬ್ತದೆ, ಆದರೂ
ತಂದೇ ಒಂದ ರೀತಿ ಮಕಾ ಮಾಡಿಕೆಂಡು ನಿಲ್ತದೆ
ನಿಂತೇ ಇರ್ತದೆ ಬೀಳೋವರೆಗೆ
ಆ ತಾಯಿ ಈ ತಾಯಿ ಮುತ್ತೈದೇರ ಮಗಾ
ಅನ್ನದೆಲ್ಲಾ ಸುಳ್ಳಾಗಿ ಎಷ್ಟೆಷ್ಟ ಮಂದಿ ಹಾದರದಾಗ
(ಆಹಾರದಾಗ), ಒಂದು ಅಶ್ಲೀಲ ಮುದ್ಯಾಗಿ
ಕರಗಿ ಹೋಗ್ತದೆ, ಎಂದೆಂದಿಗೊ ಬಂದ
ಈ ಕೊಚ್ಚೆ ರೊಚ್ಚೆ ಹೊಳಿಯಾಗೆ
*****
Related Post
ಸಣ್ಣ ಕತೆ
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…